ಈ ವಾರ ತೆರೆಗೆ `ದೃಶ್ಯ`
Posted date: 18 Wed, Jun 2014 – 12:06:47 AM

ಇ೪ ಎಂಟರ್ ಟೈನ್‌ಮೆಂಟ್ ಲಾಂಛನದಲ್ಲಿ ಮುಖೇಶ್.ಆರ್.ಮೆಹತಾ ಅವರು ನಿರ್ಮಿಸಿರುವ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕರಾಗಿ ನಟಿಸಿರುವ ‘ದೃಶ್ಯ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  
ಖ್ಯಾತ ನಿರ್ದೇಶಕ ಪಿ.ವಾಸು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರ ‘ದೃಶ್ಯಂ‘ ಚಿತ್ರದ ರಿಮೇಕ್. ಮಧುನೀಲಕಂಠನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಎಂ.ಎಸ್.ರಮೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದರೆ ವಿ.ನಾಗೇಂದ್ರಪ್ರಸಾದ್ ಗೀತರಚನೆ ಮಾಡಿದ್ದಾರೆ.
ಸುರೇಶ್‌ಅರಸ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಚಂದ್ರನ್, ನವ್ಯನಾಯರ್, ಶ್ರೀನಿವಾಸಮೂರ್ತಿ, ಜೈಜಗದೀಶ್, ಅಚ್ಯುತರಾವ್, ಶಿವಾಜಿಪ್ರಭು, ಸುಚೀಂದ್ರಪ್ರಸಾದ್, ಆಶಾಶರತ್, ಸಾಧುಕೋಕಿಲ, ಸ್ವರೂಪಿಣಿ, ಉನ್ನತಿ ಮುಂತಾದವರಿದ್ದಾರೆ.  ‘ದೃಶ್ಯ‘ ಚಿತ್ರಕ್ಕೆ ನೋಡುವುದೆಲ್ಲ ನಿಜವಲ್ಲ ಎಂಬ ಅಡಿಬರಹವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed